‘ತಾಲ್ಲೂಕಿನಲ್ಲಿ ಮಳೆ ವಿರಾಮ ನೀಡಿದ್ದರೆ ರೈತರು ಬಿತ್ತನೆ ಭರಾಟೆಯಲ್ಲಿ ತೊಡಗಿರುತ್ತಿದ್ದರು. ಆದರೆ, ದಿನ ಬಿಟ್ಟು ದಿನ ಮಳೆ ಸುರಿಯುತ್ತಿರುವುದರಿಂದ ಜೋಳ ಬಿತ್ತನೆ ನಿಧಾನವಾಗಿದೆ. ಈಗಾಗಲೇ ಕಡಲೆ ಬಿತ್ತನೆ ನಡೆಸಿದ ರೈತರ ಹೊಲದಲ್ಲಿ ಬೆಳೆಗಳ ಸಾಲು ಗೋಚರಿಸುತ್ತಿದ್ದು, ಅಧಿಕ ತೇವಾಂಶದಿಂದ ಬೆಳೆ ಸಾಯುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಚಿಮ್ಮನಚೋಡದ ರೈತ ಮುಖಂಡ ರಾಮರೆಡ್ಡಿ ಪಾಟೀಲ ಹೇಳಿದ್ದಾರೆ.