‘ಕೆರೆಯ 24 ಎಕರೆ ವಿಸ್ತೀರ್ಣ ಇದೆ. 10 ಎಕರೆಗಿಂತ ಹೆಚ್ಚು ಒತ್ತುವರಿಯಾಗಿದೆ. ಜಾಲಿ ಮರಗಳು, ಗಿಡಗಳು ಆವರಿಸಿವೆ. ಮರಗಳು ಮತ್ತು ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ವೆಂಕಟೇಶ್ ಆಗ್ರಹಿಸಿದರು. ಗ್ರಾಮದ ಪ್ರಮುಖರಾದ ಗೋಪಾಲಪ್ಪ, ಚೌಡಪ್ಪ, ಎಸ್.ರಮೇಶ್, ಮುನಿಸ್ವಾಮಿ, ಗೋವಿಂದಪ್ಪ, ಸುರೇಶ್, ಆನಂದ್, ಶಿವು, ಸಿ.ವೆಂಕಟೇಶ್, ಮಂಜುನಾಥ್, ರಾಜು ಹಾಜರಿದ್ದರು.