ಕೆಜಿಎಫ್: ಒಂದು ದಶಕದ ನಂತರ ಬೇತಮಂಗಲ ಜಲಾಶಯ ಕೋಡಿ ಹರಿದಿದ್ದು ಭಾನುವಾರ ಹತ್ತು ಸಾವಿರಕ್ಕೂ ಹೆಚ್ಚು ಜನರು ಜಲಾಶಯಕ್ಕೆ ಭೇಟಿ ನೀಡಿದ್ದರು.
ಸಾರ್ವಜನಿಕರನ್ನು ಗೇಟ್ ಮೇಲೆ ಹೋಗಲು ಜನರಿಗೆ ಅವಕಾಶ ಮಾಡಿಕೊಡಲಾಯಿತು.
ಕೋಡಿಹಳ್ಳಿ ಬಳಿ ಕೋಡಿ ನೀರಿನಲ್ಲಿ ಸ್ನಾನ ಮಾಡಲು ಮತ್ತು ಆಟ ಆಡಲು ಪೊಲೀಸರು ಮತ್ತು ಜಲಮಂಡಲಿ ಅಧಿಕಾರಿಗಳು ಅನುಮತಿ ನೀಡಿದ್ದರು. ಇದರಿಂದ ಸಾವಿರಾರು ಮಂದಿ ನೀರಿನಲ್ಲಿ ಆಟವಾಡಿ ಸಂಭ್ರಮಿಸಿದರು.
ಬೇತಮಂಗಲ ಸುತ್ತಮುತ್ತಲಿನ ಗ್ರಾಮಗಳು ಮತ್ತು ಕೆಜಿಎಫ್ ನಗರದಿಂದ ಹೆಚ್ಚು ಜನ ಬಂದಿದ್ದರು. ಬೆಳಿಗ್ಗೆಯಿಂದ ಸಂಜೆಯವರೆಗೂ ನೀರಿನಲ್ಲಿ ವಿಹಾರ ನಡೆಸಲು ಆಹಾರವನ್ನು ಕಟ್ಟಿಕೊಂಡು ಬಂದಿದ್ದರು.
ಬೇತಮಂಗಲದಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಮಕ್ಕಳು ಮರಿ ವೃದ್ಧರು ಎನ್ನದೆ ಎಲ್ಲರೂ ಮಿಂದರು. ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಪೂರೈಕೆ ನಿಗಮದ ಉಪಾಧ್ಯಕ್ಷ ಎನ್.ಶ್ರೀನಿವಾಸ್ ಬೇತಮಂಗಲ ಮತ್ತು ರಾಮಸಾಗರ ಕೆರೆಗೆ ಬಾಗಿನ