ನವದೆಹಲಿ: ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸರ್ವ ಸನ್ನದ್ಧಗೊಳಿಸುತ್ತಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವರಿಷ್ಠರು, ಚುನಾವಣೆ ಪ್ರಣಾಳಿಕೆ ಸಮಿತಿಗೆ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ.
ಇದೇ ವೇಳೆ, ರಾಜ್ಯದ 15 ಜಿಲ್ಲಾ ಘಟಕಗಳ ಅಧ್ಯಕ್ಷರ ನೇಮಕದ ಆದೇಶ ಹೊರಡಿಸಲಾಗಿದ್ದು, ಈ ಪೈಕಿ ಚಿಕ್ಕೋಡಿ ಜಿಲ್ಲಾ ಘಟಕವನ್ನು ಹೊಸದಾಗಿ ರಚಿಸಲಾಗಿದೆ.
ಪಕ್ಷದ ಹಿರಿಯ ಮುಖಂಡರನ್ನು ಒಳಗೊಂಡ 94 ಸದಸ್ಯರ ಕಾರ್ಯನಿರ್ವಾಹಕ ಸಮಿತಿಯ ಪಟ್ಟಿಗೂ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಒಪ್ಪಿಗೆ ನೀಡಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಜನಾರ್ದನ ದ್ವಿವೇದಿ ಸೋಮವಾರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಜಿಲ್ಲಾ ಘಟಕ ಅಧ್ಯಕ್ಷರ ಪಟ್ಟಿ
ಚಿಕ್ಕೋಡಿ: ಲಕ್ಷ್ಮಣರಾವ್ ಚಿಂಗಳೆ,ಬೆಳಗಾವಿ: ವಿನಯ್ ನಾವಲಗಟ್ಟಿ,ಬಳ್ಳಾರಿ ನಗರ: ರಫೀಕ್,
ದಕ್ಷಿಣ ಕನ್ನಡ: ಕೆ.ಹರೀಶ ಕುಮಾರ್, ಕಲಬುರ್ಗಿ: ಜಗದೇವ ಗುತ್ತೇದಾರ,
ಹಾವೇರಿ: ಸಯ್ಯದ್ ಅಜ್ಜಂಪೀರ್ ಖಾದ್ರಿ, ಕೊಡಗು: ಎಂ.ಬಿ. ಶಿವಮಾದಪ್ಪ, ಉಡುಪಿ: ಜನಾರ್ದನ ತೋನ್ಸೆ, ರಾಮನಗರ: ಎಸ್.ಗಂಗಾಧರ, ಬೆಂಗಳೂರು ಉತ್ತರ:ಎಂ.ರಾಜಕುಮಾರ್, ಬೆಂಗಳೂರು ಕೇಂದ್ರ: ಜಿ.ಶೇಖರ್, ಬೆಂಗಳೂರು ದಕ್ಷಿಣ: ಜಿ.ಕೃಷ್ಣಪ್ಪ, ಹುಬ್ಬಳ್ಳಿ ನಗರ: ಅಲ್ತಾಫ ಹಳ್ಳೂರ, ಬೀದರ್: ಬಸವರಾಜ ಜಾಬಶೆಟ್ಟಿ, ಚಿಕ್ಕಬಳ್ಳಾಪುರ: ಜಿ. ಕೇಶವರೆಡ್ಡಿ,
ಚುನಾವಣಾ ಪ್ರಣಾಳಿಕೆ ಸಮಿತಿ: ಅಧ್ಯಕ್ಷ– ಎಂ.ವೀರಪ್ಪ ಮೊಯಿಲಿ
ಉಪಾಧ್ಯಕ್ಷ– ಬಿ.ಎಲ್. ಶಂಕರ್
ಸದಸ್ಯರು
ಎಸ್.ಆರ್.ಪಾಟೀಲ, ದಿನೇಶ ಗುಂಡೂರಾವ್, ಕಾಗೋಡು ತಿಮ್ಮಪ್ಪ, ಎಚ್.ಕೆ. ಪಾಟೀಲ, ಎಂ.ಬಿ. ಪಾಟೀಲ, ಮಾರ್ಗರೆಟ್ ಆಳ್ವಾ, ಎಚ್.ಸಿ. ಮಹದೇವಪ್ಪ, ಅಪ್ಪಾಜಿ ನಾಡಗೌಡ, ವಿ.ಆರ್. ಸುದರ್ಶನ್, ಕೃಷ್ಣ ಬೈರೇಗೌಡ, ಸತೀಶ ಜಾರಕಿಹೊಳಿ, ವಿನಯ್ಕುಮಾರ ಸೊರಕೆ,
ಜೆ.ಅಲೆಕ್ಸಾಂಡರ್, ಕೆ.ಸಿ. ಕೊಂಡಯ್ಯ, ಬಿ.ಕೆ. ಚಂದ್ರಶೇಖರ್, ಎಲ್.ಹನುಮಂತಪ್ಪ, ಕೆ.ಎನ್. ರಾಜಣ್ಣ, ಐ.ಜಿ. ಸನದಿ, ಎಸ್.ಜಿ. ನಂಜಯ್ಯನಮಠ, ಅಲ್ಲಮಪ್ರಭು ಪಾಟೀಲ, ವೆಂಕಟರಾವ್ ಘೋರ್ಪಡೆ, ರಾಧಾಕೃಷ್ಣ, ಲೋಹಿತ್ ನಾಯ್ಕರ್, ಪುಷ್ಪಾ ಅಮರನಾಥ,ಜಮೀರ್ ಪಾಷಾ, ಎಚ್.ಎಂ. ರೇವಣ್ಣ,ರಾಮಲಿಂಗಾರೆಡ್ಡಿ,ಪ್ರಿಯಾಂಕ್ ಖರ್ಗೆ,ಯು.ಟಿ. ಖಾದರ್,ಎಚ್.ಎಂ. ವಿಶ್ವನಾಥ,ಕೆ.ಜೆ. ಜಾರ್ಜ್,ಉಮಾಶ್ರೀ, ಸೈಯ್ಯದ್ ನಾಸಿರ್ ಹುಸೇನ್,
ಕೆಪಿಸಿಸಿ ಕಾರ್ಯನಿರ್ವಾಹಕ ಸಮಿತಿ ಸದಸ್ಯರು
ಶಾರದಾ ಮೋಹನ ಶೆಟ್ಟಿ, ಜಿ.ಪದ್ಮಾವತಿ, ಶರಣಪ್ಪ ಸುಣಗಾರ, ಬಿ.ಜಿ. ಗೋವಿಂದಪ್ಪ, ಎಂ.ರಾಮಚಂದ್ರಪ್ಪ, ಎಚ್.ಎಂ. ರೇವಣ್ಣ, ಬಸವರಾಜ್ ಶಿವಣ್ಣವರ್, ದೊಡ್ಡಸ್ವಾಮಿ ಗೌಡ, ಲೋಹಿತ್ ನಾಯ್ಕರ್, ಎಸ್.ಆರ್. ಮೋರೆ, ರಾಮಾ ಲಿಂಬಾಜಿ ಮಾನೆ, ಪುಟ್ಟರಂಗ ಶೆಟ್ಟಿ, ಮಂಜುನಾಥ, ತುಳಸೀರಾಮ್, ಶಾಂತಾರಾಮ ಹೆಗಡೆ, ಜೆ.ಅಲೆಕ್ಸಾಂಡರ್, ಅಭಯಚಂದ್ರ ಜೈನ್, ಪಾರಸಮಲ್ ಸುಖಾನಿ, ಎ.ಬಿ. ಪಾಟೀಲ, ಶಾಮನೂರು ಶಿವಶಂಕರಪ್ಪ, ಎ.ಬಿ. ಮಾಲಕರೆಡ್ಡಿ, ಸಲೀಂ ಅಹಮದ್, ಅಬ್ದುಲ್ ವಹಾಬ್, ಮಹಮ್ಮದ್ ಝಾಹಿದ್, ಹಸನ್ಪೀರ್ ವಾಲೀಕಾರ್, ಶಿವರಾಜ ತಂಗಡಗಿ, ಕರಿಯಣ್ಣ,
ಅಂಜನಮೂರ್ತಿ, ನರಸಿಂಗರಾವ್ ಸೂರ್ಯವಂಶಿ, ಆರ್.ಬಿ. ತಿಮ್ಮಾಪುರ, ಧರ್ಮಸೇನ, ಪ್ರಕಾಶ ರಾಠೋಡ, ಎಚ್.ಹನುಮಂತಪ್ಪ, ಬಲದೇವಕೃಷ್ಣ, ಶ್ಯಾಂ ಘಾಟಗೆ, ಪುಂಡಲೀಕ ರಾವ್, ಸುಮಾ ವಸಂತ, ವಿ.ಎಸ್. ಉಗ್ರಪ್ಪ, ಕೆ.ಎನ್. ರಾಜಣ್ಣ, ವಿ.ಮುನಿಯಪ್ಪ, ಪ್ರೇಮಚಂದ್ರ ಸಾಗರ್, ಸಿ.ನಾರಾಯಣಸ್ವಾಮಿ, ಎಸ್.ಎಂ. ಆನಂದ್, ಮಂಜುನಾಥ ಭಂಡಾರಿ, ದಾಸೇಗೌಡ, ಮರಿಚಿನ್ನಮ್ಮ, ಇಕ್ಬಾಲ್ ಅಹಮದ್ ಸರಡಗಿ, ಐ.ಜಿ. ಸನದಿ, ಫಿರೋಜ್ ಶೇಟ್, ಬಿ.ನಾರಾಯಣ ರಾವ್, ಮಾಲೀಕಯ್ಯ ಗುತ್ತೇದಾರ್, ವೆಂಕಟರಮಣಪ್ಪ, ಬಿ.ಸಿ. ಪಾಟೀಲ, ಕೆ.ಶಿವಮೂರ್ತಿ, ಎಚ್.ಸಿ. ರುದ್ರಪ್ಪ,
ಕಡೂರು ನಂಜಪ್ಪ, ರಘು ಆಚಾರ್, ಸೌಂದರ್ಯಾ ಮಂಜಪ್ಪ, ಉಮಾಶ್ರೀ, ಜಯಮಾಲಾ, ರಮ್ಯಾ, ಗುರಮ್ಮ ಸಿದ್ದಾರೆಡ್ಡಿ, ಸವಿತಾ ಪೂಂಚಾ, ಬಲ್ಲಾಳ, ಕೆ.ಎಂ. ನಾಗರಾಜ್, ಡೇವಿಡ್ ಸಿಮಿಯೋನ್, ಹಸನಸಾಬ್ ದೋಟಿಹಾಳ, ಸಿ.ಆರ್. ನಾರಾಯಣಪ್ಪ, ಜಮೀರ್ ಪಾಷಾ, ಟಿ.ವಿ. ಮಾರುತಿ, ಸುಂದರ್ ಪಾಂಡಿಯನ್, ರಫಿಕ್ ಖಾನಾಪುರಿ, ಎಚ್.ವೈ. ಮೇಟಿ, ಸಿ.ಎಸ್. ಶಿವಳ್ಳಿ, ಮಂಜುನಾಥ ಕುನ್ನೂರ, ಶರಣಪ್ಪ ಮತ್ತೂರ, ಮಲ್ಲಿಕಾರ್ಜುನ ನಾಗಪ್ಪ, ಅಜಯ್ ಸಿಂಗ್, ರಾಜಶೇಖರ ಪಾಟೀಲ, ರಹೀಂ ಖಾನ್, ಪಿ.ಟಿ. ಪರಮೇಶ್ವರ ನಾಯ್ಕ, ಎನ್.ಎಂ. ನಬಿ, ಈ.ತುಕಾರಾಂ, ವಿನಯಕುಮಾರ್ ಸೊರಕೆ, ಕೆ.ಆರ್. ಪೇಟೆ ಕೃಷ್ಣ, ಚಂದ್ರಲೇಖಾ, ಜಾನ್ ರಿಚರ್ಡ್ ಲೋಬೊ, ರಾಜು ಆಲಗೂರ, ಬಿ.ಆರ್. ಯಾವಗಲ್, ಬಿ.ಎಸ್. ಪಾಟೀಲ, ಅಶೋಕ ಪಟ್ಟಣ, ಪ್ರೇಮಾ ಕಾರಿಯಪ್ಪ, ಧನಂಜಯ ಕುಮಾರ್.
ಇವರ ಜೊತೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಪದಾಧಿಕಾರಿಗಳಾದ ಆಸ್ಕರ್ ಫರ್ನಾಂಡಿಸ್, ಬಿ.ಕೆ. ಹರಿಪ್ರಸಾದ್, ಕೆ.ಎಚ್. ಮುನಿಯಪ್ಪ, ಸತೀಶ ಜಾರಕಿಹೊಳಿ, ಸೂರಜ್ ಹೆಗಡೆ,
ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಬಿ.ಜನಾರ್ದನ ಪೂಜಾರಿ, ಅಲ್ಲಂ ವೀರಭದ್ರಪ್ಪ, ಆರ್.ವಿ. ದೇಶಪಾಂಡೆ,
ಕೇಂದ್ರದ ಮಾಜಿ ಸಚಿವರಾದ ಸಿ.ಕೆ. ಜಾಫರ್ ಷರೀಫ್, ಮಾರ್ಗರೆಟ್ ಆಳ್ವಾ, ಎಂ.ವೀರಪ್ಪ ಮೊಯಿಲಿ, ಕೆ.ರೆಹಮಾನ್ ಖಾನ್, ಸಿ.ಎಂ. ಇಬ್ರಾಹಿಂ, ಎಂ.ಎಚ್. ಅಂಬರೀಷ್, ಸಿದ್ದು ನ್ಯಾಮಗೌಡ, ತಾರಾದೇವಿ ಸಿದ್ಧಾರ್ಥ,
ಇತರ ಸಮಿತಿ ಮುಖ್ಯಸ್ಥರಾದ ಬಸವನಗೌಡ ಬಾದರ್ಲಿ, ಲಕ್ಷ್ಮಿ ಹೆಬ್ಬಾಳಕರ್, ಪ್ಯಾರೇ ಜಾನ್, ಎಚ್.ಎಸ್. ಮಂಜುನಾಥ, ರಾಕೇಶ್ ಮಲ್ಲಿ,
ಸಂಸತ್ ಸದಸ್ಯರಾದ ಎಸ್.ಪಿ. ಮುದ್ದಹನುಮೇಗೌಡ, ಜೈರಾಮ್ ರಮೇಶ್, ಪ್ರಕಾಶ ಹುಕ್ಕೇರಿ, ಡಿ.ಕೆ. ಸುರೇಶ, ಧ್ರುವನಾರಾಯಣ,
ಬಿ.ಎನ್, ಚಂದ್ರಪ್ಪ, ಬಿ.ವಿ. ನಾಯ್ಕ, ಕೆ.ಸಿ. ರಾಮಮೂರ್ತಿ, ರಾಜೀವ ಗೌಡ ಅವರು ಕಾರ್ಯಕಾರಿ ಸಮಿತಿಯಲ್ಲಿ ಇದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.