ಸಂಭಾವನೆ ಬೇಡ: ಜೈಲಿನಲ್ಲಿ ಕೈದಿಗಳಿಗೆ ದಂತ ಚಿಕಿತ್ಸೆ ನೀಡಿದ್ದಕ್ಕೆ ಪ್ರತಿಯಾಗಿ ಸಂಭವನೆ ಪಡೆಯಲು ರಾಜೇಶ್ ಹಾಗೂ ನೂಪುರ್ ತಲ್ವಾರ್ ದಂಪತಿ ನಿರಾಕರಿಸಿದ್ದಾರೆ. 2013ರಿಂದ ಜೈಲಿನಲ್ಲಿರುವ ದಂಪತಿ, ಅಂದಿನಿಂದ ಕೈದಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಇವರಿಗೆ ₹49,500 ಸಂಭಾವನೆ ನೀಡಲಾಗಿತ್ತು. ಆದರೆ ಅವರು ಇದನ್ನು ಪಡೆಯಲು ನಿರಾಕರಿಸಿದ್ದಾರೆ ಎಂದು ಜೈಲು ಅಧೀಕ್ಷಕ ದಾಧಿರಾಮ್ ಮೌರ್ಯ ತಿಳಿಸಿದ್ದಾರೆ.