ಘಟನೆ ಹಿನ್ನೆಲೆ: ಕೆಲ ವಾರದ ಹಿಂದೆ ಮಾಸ್ಕೋದಿಂದ ಭಾರತಕ್ಕೆ ಬಂದಿದ್ದ ಇವ್ಗಿನಿ ಬೆರ್ಡನಿ ಕೊವ್, ತಮಿಳುನಾಡಿನ ಕಂಚಿಪುರದಲ್ಲಿ ನೆಲೆಸಿದ್ದ. ಈತನ ಎಟಿಎಂ ಕಾರ್ಡ್ ಸ್ಥಗಿತಗೊಂಡಿದ್ದರಿಂದ ದೇವಸ್ಥಾನದ ಮುಂದೆ ಭಿಕ್ಷೆ ಬೇಡಲು ಶುರುಮಾಡಿದ್ದ. ಈ ಬಗ್ಗೆ ದೂರು ಬಂದ ಕಾರಣ, ಠಾಣೆಗೆ ಕರೆತಂದ ಪೊಲೀಸರು ಸ್ವಲ್ಪ ಹಣವನ್ನೂ ನೀಡಿ, ದೂತಾವಾಸ ಕಚೇರಿ ಸಂಪರ್ಕಿಸುವ ಸಲುವಾಗಿ ಚೆನ್ನೈಗೆ ಕಳುಹಿಸಿದ್ದರು.