‘ದೊಡ್ಡಕಲ್ಲಸಂದ್ರದ ನಾರಾಯಣನಗರ ಮೊದಲ ಹಂತದಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಟ್ರಕ್ಗಳಲ್ಲಿ ಕಸ ತಂದು ನಡು ರಸ್ತೆಗಳಿಗೆ ಸುರಿಯುವುದು ನಿರಂತರವಾಗಿ ನಡೆಯುತ್ತಿದೆ. ಕನಕಪುರ ರಸ್ತೆಯಿಂದ ಆವಲಹಳ್ಳಿಗೆ ಹೋಗುವ ಜೋಡಿ ರಸ್ತೆ ಕಸದಿಂದ ತುಂಬಿ ಹೋಗಿದ್ದು, ದುರ್ನಾತ ಬೀರುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಬೈಕ್ ಸವಾರರು, ಪಾದಚಾರಿಗಳು ದುರ್ವಾಸನೆ ಸಹಿಸಲಾಗದೆ, ಮೂಗು ಮುಚ್ಚಿಕೊಳ್ಳುವ ಸ್ಥಿತಿ ಇದೆ’ ಎಂದು ಸ್ಥಳೀಯರು ದೂರುತ್ತಾರೆ.