ಮೂಡಲಗಿ: ಕಳೆದ ಎರಡು ವಾರಗಳಿಂದ ಮೂಡಲಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿಟ್ಟುಬಿಡದೆ ಮಳೆ ಸುರಿಯುತ್ತಿದ್ದು, ಸಮೀಪದ ಅರಳಿಮಟ್ಟಿ ಗ್ರಾಮದ ಶಿವಾನಂದ ಮಲ್ಲಪ್ಪ ಬ್ಯಾಳಿ ಅವರು ಬೆಳೆದ ಎರಡು ಎಕರೆ ಕಲ್ಲಂಗಡಿ ಬೆಳೆಯ ಮಳೆಯ ಹೊಡೆತಕ್ಕೆ ನಾಶವಾಗಿ ಕಂಗಾಲಾಗಿದ್ದಾರೆ.
ಸತತ ಮಳೆಯಿಂದ ತೋಟದಲ್ಲಿಯ ಎರಡು ಕೊಳವೆ ಬಾವಿಯಿಂದ ನೀರು ಹೊರಚೆಲ್ಲುತ್ತಿದ್ದು, ಇದರಿಂದ ತೋಟದ ತುಂಬೆಲ್ಲ ನೀರು ನಿಂತು ತೋಟವು ಕರೆಯ ರೀತಿಯಲ್ಲಿ ಕಾಣುವಂತಾಗಿದೆ.
ಅಂದಾಜು ಕಲ್ಲಂಗಡಿ ಬೆಳಿಯಿಂದ ₹6 ಲಕ್ಷ ಹಾನಿಯಾಗಿದ್ದು, ಕಲ್ಲಂಗಡಿ ಬೆಳೆಗಾಗಿ ಬ್ಯಾಂಕಿನಿಂದ ₹1.40 ಲಕ್ಷ ಸಾಲವನ್ನು ಮಾಡಿ, ಕಲ್ಲಂಗಡಿಯನ್ನು ಬೆಳೆಸಿದ್ದರು. ಹೀಗೆ ಮಳೆಗೆ ಕಲ್ಲಂಗಡಿ ಕೊಚ್ಚಿಹೋಗಿದ್ದರಿಂದ ಏನು ಮಾಡಬೇಕು ಎಂದು ರೈತ ಶಿವಾನಂದ ಚಿಂತಾಭ್ರಾಂತನಾಗಿದ್ದಾರೆ.