ಕರ್ನೂಲ್ನ ಸಂಸದೆ ಹಾಗೂ ಅವರು ಬೆಂಬಲಿಗರನ್ನು ಟಿಡಿಪಿ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು. ವೈಎಸ್ಆರ್ಸಿಯಿಂದ ಟಿಡಿಪಿಗೆ ಸೇರ್ಪಡೆಯಾಗುತ್ತಿರುವವರಲ್ಲಿ ರೇಣುಕಾ ಎರಡನೇ ಸಂಸದರು. ಈ ಹಿಂದೆ ನಂದ್ಯಾಲ್ ಕ್ಷೇತ್ರದ ವೈಎಸ್ಆರ್ ಪಕ್ಷದ ಸಂಸದ ಎಸ್.ಪಿ.ವೈ. ರೆಡ್ಡಿ ಕೂಡ ಟಿಡಿಪಿ ಸೇರಿದ್ದರು.
ಪಕ್ಷದ ಸಂಸದೆಗೆ ಆಡಳಿತ ಪಕ್ಷ ಹಣದ ಆಮಿಷ ಒಡ್ಡಿದೆ ಎಂದು ವೈಎಸ್ಆರ್ಸಿ ಆರೋಪಿಸಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಆಂಧ್ರಪ್ರದೇಶದಲ್ಲಿ ವೈಎಸ್ಆರ್ಸಿಯಿಂದ 8 ಸಂಸದರು ಗೆದ್ದಿದ್ದು, ಇಬ್ಬರು ಪಕ್ಷಾಂತರ ಮಾಡಿದ್ದರಿಂದ ಪಕ್ಷದ ಸಂಸದರ ಸಂಖ್ಯೆ ಆರಕ್ಕಿಳಿದಿದೆ.