‘ಇನ್ನೊಂದು ಪ್ರಕರಣದಲ್ಲಿ ಮಲೇಷ್ಯಾದಿಂದ ಏರ್ ಏಷ್ಯಾ ಎ.ಕೆ 053 ವಿಮಾನದಲ್ಲಿ ಬಂದಿಳಿ ದಿದ್ದ ಮುನಿಸ್ವಾಮಿ ಅವರ ಬಳಿಯೂ ಚಿನ್ನ ಸಿಕ್ಕಿತ್ತು. ಅವರು ಚಿನ್ನಕ್ಕೆ ಕಪ್ಪು ಅಂಟಿನ ಪಟ್ಟಿಯನ್ನು ಸುತ್ತಿ ಸಾಗಿಸುತ್ತಿದ್ದರು. ನಿಲ್ದಾಣದಿಂದ ಹೊರಬಂದ ಬಳಿಕ, ಆ ಚಿನ್ನವನ್ನು ತಮಿಳುನಾಡಿನ ವ್ಯಕ್ತಿಯೊಬ್ಬನಿಗೆ ಅವರು ನೀಡಬೇಕಿತ್ತು. ಅಷ್ಟರಲ್ಲಿ ಬಂಧಿಸಿದೆವು. ಈಗ ಅವರ ಕೃತ್ಯಕ್ಕೆ ಸಹಕಾರ ನೀಡುತ್ತಿದ್ದವರನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಹರ್ಷವರ್ಧನ್ ತಿಳಿಸಿದರು.