‘ಸಹಜ ಹೆರಿಗೆ ಮಾಡಿಸಲು ಸಾಧ್ಯವಿಲ್ಲವೆಂದಾಗ ಶಸ್ತ್ರಚಿಕಿತ್ಸೆ ನಡೆಸಿ, ತಾಯಿ–ಮಗು ಜೀವ ಉಳಿಸುವುದು ಮೆಚ್ಚುವಂತಹುದು. ಸಹಜ ಹೆರಿಗೆ ಮಾಡಿಸಿದರೆ ಹಣ ಸಿಗುವುದಿಲ್ಲವೆಂಬ ಒಂದೇ ಕಾರಣಕ್ಕೆ ಸಿಸೇರಿಯನ್ ಮಾಡಿದರೆ ಅದನ್ನು ವೈದ್ಯ ವೃತ್ತಿ ಎನ್ನುವುದೋ ಅಥವಾ ಬೇರೆ ಏನೆಂದು ಕರೆಯುವುದು. ನಾವೆಲ್ಲ ಸಿಸೇರಿಯನ್ನಿಂದ ಹುಟ್ಟಿದವರಲ್ಲ. ನನ್ನ ತಾಯಿಗೆ ಎಂಟು ಹೆರಿಗೆಗಳು ಸಹಜವಾಗಿಯೇ ಆಗಿವೆ. ಆದರೆ, ಈಗ ವೈದ್ಯರು ಮಾತೆತ್ತಿದರೆ ಕತ್ತರಿ ಹಾಕುತ್ತಿದ್ದಾರೆ’ ಎಂದು ಹರಿಹಾಯ್ದರು.