ಈ ವೇಳೆ ಮಾತನಾಡಿದ ದೇವೇಗೌಡ ಅವರು, ‘ಕೈ ಮಗ್ಗ ಹಾಗೂ ಗುಡಿ ಕೈಗಾರಿಕೆಗಳಲ್ಲಿ ತಯಾರಾದ ವಸ್ತುಗಳನ್ನು ಎಲ್ಲಾ ವರ್ಗದ ಹಾಗೂ ಪ್ರದೇಶದ ಜನರು ಬಳಸುತ್ತಾರೆ. ಇಂತಹ ಕೈಮಗ್ಗ ಉತ್ಪನ್ನಗಳ ಮೇಲೆ ಕೇಂದ್ರ ಸರ್ಕಾರ ಜಿಎಸ್ಟಿ ತೆರಿಗೆ ವಿಧಿಸುವುದರಿಂದ ಕೈಮಗ್ಗ ಉತ್ಪನ್ನಗಳಿಂದಲೇ ಬದುಕು ಕಟ್ಟಿಕೊಂಡಿರುವ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಲಿವೆ’ ಎಂದು ಹೇಳಿದ್ದಾರೆ.