‘ಕೆಲವು ಬಗೆಯ ಕೈ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ರಂಗಕರ್ಮಿ ಪ್ರಸನ್ನ ಕೆಲವು ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು. ಗ್ರಾಮ ಸೇವಾ ಸಂಘವನ್ನು ಪ್ರತಿನಿಧಿಸುತ್ತಿರುವ ಪ್ರೊ.ಆಶಿಶ್ ನಂದಿ, ಶ್ಯಾಮ್ ಬೆನಗಲ್ ಅವರು ನನ್ನನ್ನು ಭೇಟಿ ಮಾಡಿ ಮನವಿ ಅರ್ಪಿಸಿದ್ದಾರೆ. ಬೆಣ್ಣೆ ತಯಾರಿಕೆಯಿಂದ ಹಿಡಿದು ಕೈಯಿಂದ ಮಾಡಿದ ಕಾಗದದವರೆಗಿನ ಹಲವು ಉತ್ಪನ್ನಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡುವ ಅಗತ್ಯವಿದೆ’ ಎಂದೂ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.