ನವೆಂಬರ್ 3ರಂದು ಸಂಘಟನೆಯ ವಿಂಶತಿ ಮಹೋತ್ಸವ ಅಂಗವಾಗಿ ಕೋಟ ವರುಣ ತೀರ್ಥ ಕೆರೆಯ ಸಮೀಪ ನಡೆಯುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ₹ 10 ಸಾವಿರ ನಗದು ಹಾಗೂ ₹ 10 ಸಾವಿರ ಮೌಲ್ಯದ ಬೆಳ್ಳಿಯ ದೇವರ ಪ್ರತಿಮೆ ಒಳಗೊಂಡಿದೆ ಎಂದು ಸಂಘದ ಅಧ್ಯಕ್ಷ ರವೀಂದ್ರ ಕೋಟ ತಿಳಿಸಿದ್ದಾರೆ.