ಸಹನಾ, ಮಾರನಾಯಕನಹಳ್ಳಿ ನಿವಾಸಿ ವೆಂಕಟೇಶ್ ಎಂಬುವರ ಮಗಳು. ಮನೆ ಮುಂದೆ ಪಟಾಕಿ ಸಿಡಿಸುವುದನ್ನು ಆಕೆ ನೋಡುತ್ತಾ ನಿಂತಿದ್ದಳು. ಅದೇ ಕಾಲೊನಿಯ ನಿವಾಸಿ ರಾಜು(18) ಅಲಿಯಾಸ್ ಬಂಗಾರಿ ಅಡ್ಡಾದಿಡ್ಡಿಯಾಗಿ ಬೈಕ್ ಓಡಿಸಿಕೊಂಡು ಬಂದು ಆಕೆಗೆ ಗುದ್ದಿದ್ದಾನೆ.
ಬಾಲಕಿ ಕೆಳಗೆ ಬಿದ್ದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದಳು. ಪೋಷಕರು ಯಲಹಂಕದ ಆಸ್ಪತ್ರೆಗೆ ಆಕೆಯನ್ನು ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾಳೆ. ಆರೋಪಿ ರಾಜು ಸ್ವಲ್ಪ ದೂರದಲ್ಲೇ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ ಎಂದು ಚಿಕ್ಕಜಾಲ ಸಂಚಾರ ಪೊಲೀಸರು ತಿಳಿಸಿದರು.
ಬಾಲಕಿಯ ಪೋಷಕರು ದೂರು ಕೊಟ್ಟಿಲ್ಲ. ದೂರು ನೀಡುವಂತೆ ಅವರಿಗೆ ಮನವಿ ಮಾಡುತ್ತೇವೆ. ಒಂದು ವೇಳೆ ಅವರು ದೂರು ನೀಡದಿದ್ದರೆ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಎಂದು ಹೇಳಿದರು.