‘ಸಕಾಲಕ್ಕೆ ಸಂಬಳ ಕೊಡದಿರುವುದನ್ನು ಬಿಬಿಎಂಪಿಯ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೆವು. ಇದರಿಂದ ಕೆರಳಿದ ಗುತ್ತಿಗೆದಾರ ನಾಗೇಶ್, ಮೇಸ್ತಿಗಳಾದ ಅಕ್ಷಯ್, ನಂದೀಶ್ ಹಾಗೂ ಸಾದಿಕ್ ಅವರು ಅ.12ರಂದು ಕಾರ್ಮಿಕರಿಗೆ ಅವ್ಯಾಚ್ಯ ಪದಗಳಿಂದ ನಿಂದಿಸಿದರು. ‘ನಿಮ್ಮ ಸಂಬಳ ನನ್ನ ಪ್ಯಾಂಟ್ನಲ್ಲಿದೆ. ಬಂದು ತೆಗೆದುಕೊಳ್ಳಿ’ ಎಂದು ಆಕ್ಷೇಪಾರ್ಹ ರೀತಿಯಲ್ಲಿ ಮಾತನಾಡಿದರು’ ಎಂದು ಬಿಬಿಎಂಪಿ ಪೌರಕಾರ್ಮಿಕರ ಸಂಘದ ಸದಸ್ಯೆ ಮೈತ್ರಿ ಆರೋಪಿಸಿದರು.