ಪ್ರಕರಣ ತಿರುಚುವ ಅವಶ್ಯಕತೆಯಿಲ್ಲ
ಇದೇ ಪ್ರಕರಣ ಸಂಬಂಧ ನಗರದಲ್ಲಿ ಗುರುವಾರ ಪ್ರತಿಕ್ರಿಯಿಸಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ, ‘ಟೆಕ್ಕಿ ನಂದಿನಿ ಮೇಲಿನ ಹಲ್ಲೆ ಪ್ರಕರಣವನ್ನು ತಿರುಚುವ ಅವಶ್ಯಕತೆ ಪೊಲೀಸರಿಗಾಗಲಿ ಅಥವಾ ಸರ್ಕಾರಕ್ಕಾಗಲಿ ಇಲ್ಲ. ಘಟನೆ ಏನಾಗಿದೆಯೋ ಅದನ್ನೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ’ ಎಂದರು.