ಪರಶುರಾಂಪುರ: ದೊಡ್ಡಚೆಲ್ಲೂರು ಮತ್ತು ಪಾಲನೇತ್ರಪುರವನ್ನು ಸಂಪರ್ಕಿಸುವ ರಸ್ತೆ ಮಧ್ಯದಲ್ಲಿ ದೊಡ್ಡ ಹಳ್ಳ ಹಾದುಹೋಗಿದ್ದು, ಈ ಭಾಗದಲ್ಲಿ ನಾಗರಿಕರು ಸಂಚರಿಸುವುದೇ ದುಸ್ತರವಾಗಿದೆ.
ಗಡಿಭಾಗದ ಆಂಧ್ರರಪ್ರದೇಶದ ಅಗ್ರಹಾರಕ್ಕೆ ಹೋಗಿ ಅಲ್ಲಿಂದ ದೊಡ್ಡಚೆಲ್ಲೂರಿಗೆ ಬರಲು ಸುಮಾರು 15 ಕಿ.ಮೀ ಕ್ರಮಿಸಬೇಕಾಗುತ್ತದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಸೇತುವೆ ನಿರ್ಮಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಟಿ. ಕುಮಾರಸ್ವಾಮಿ ಆಗ್ರಹಿಸಿದರು.
ಸಂದರ್ಭದಲ್ಲಿ ಪಾಲನೇತ್ರಪುರದ ನರಸಿಂಹಮೂರ್ತಿ, ಹನುಮಂತರಾಯ, ಮಂಜುನಾಥ, ನಾಗರಾಜ್ , ರಾಮೇಗೌಡ ಹಾಗೂ ಬಿಜೆಪಿ ಮುಖಂಡರಾದ ಶಿವುಪುತ್ರಪ್ಪ ಶಿರಿಯಪ್ಪ, ಇ.ಎನ್. ವೆಂಕಟೇಶ್ ಇದ್ದರು.