ಮುಳಗುಂದ: ಹೋಬಳಿ ವ್ಯಾಪ್ತಿಯಲ್ಲಿ ಸೂರ್ಯಕಾಂತಿ ಬೆಳೆಗೆ ಹಸಿರು ಎಲೆ ತಿನ್ನುವ ಕೀಟಬಾಧೆ ಕಾಡುತ್ತಿದೆ. ಇದರಿಂದ ರೈತರು ಇಳುವರಿ ಕುಸಿತದ ಆತಂಕ ಎದುರಿಸುತ್ತಿದ್ದಾರೆ. ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿರುವುದರಿಂದ ಹಿಂಗಾರು ಬೆಳೆ ಬಿತ್ತನೆಗೂ ಅಡ್ಡಿಯಾಗಿದೆ.
ಕೀಟಬಾಧೆ ತಡೆಯುವ ನಿಟ್ಟಿನಲ್ಲಿ ಮೋನೋಪ್ರೊಟೋಮಾಸ್ ಹಾಗೂ ಪ್ರೈಪೈನೋಪಾಸ್ ರಾಸಾಯನಿಕವನ್ನು ಪ್ರತಿ ಲೀಟರಿಗೆ 2 ಎಂ.ಎಲ್.ನಷ್ಟು ಮಿಶ್ರಣ ಮಾಡಿ ಸಿಂಪರಣೆ ಮಾಡಬೇಕು ಎಂದು ಕೃಷಿ ಸಹಾಯಕ ಅಧಿಕಾರಿ ಎಂ.ಬಿ.ಸುಂಕಾಪುರ ತಿಳಿಸಿದ್ದಾರೆ.