ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರ ಮಗ ಜಯ್ ಷಾ ಅವರ ಕಂಪೆನಿಯ ವಹಿವಾಟು 16,000 ಪಟ್ಟು ಹೆಚ್ಚಾಯಿತು ಎಂದು ದಿ ವೈರ್ ವರದಿ ಪ್ರಕಟಿಸಿತ್ತು. ಇದರ ವಿರುದ್ಧ ಜಯ್ ಷಾ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿ ಅಹಮದಾಬಾದ್ ನ್ಯಾಯಾಲಯವು ‘ಆ ವರದಿಗೆ ಸಂಬಂಧಿಸಿ ಬೇರೆ ಯಾವುದೇ ವರದಿ ಪ್ರಕಟಿಸಬೇಡಿ’ ಎಂದು ದಿ ವೈರ್ ಮೇಲೆ ಸೋಮವಾರ ನಿರ್ಬಂಧ ಹೇರಿತ್ತು.