ಚೋಳರಪಾಳ್ಯದ ಬಿಜೆಪಿ ಮುಖಂಡ ರವೀಂದ್ರ ಬೆಂಬಲಿಗರಾದ ನವೀನ್, ರೋಹಿತ್ ಅವರು ನನಗೆ ಹಣ ನೀಡಬೇಕು. ಕೆಲ ತಿಂಗಳಿನಿಂದ ಹಣ ನೀಡದೆ ಸತಾಯಿಸುತ್ತಿದ್ದರು. ಈ ಬಗ್ಗೆ ಒತ್ತಡ ಹೇರಿದ್ದಕ್ಕೆ, ‘ನಮಗೆ ರವೀಂದ್ರ ಅವರ ಬೆಂಬಲವಿದೆ. ಹಣ ಹಿಂದಿರುಗಿಸುವುದಿಲ್ಲ’ ಎಂದು ಅವರು ಹೇಳಿದ್ದರು ಎಂದು ಮಹಾಲಕ್ಷ್ಮಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.