ರವೀಂದ್ರ, ಆದಿಶಕ್ತಿ, ಮಹದೇವಯ್ಯ ಮಾತನಾಡಿ, ಇತ್ತೀಚೆಗೆ ಸರ್ಕಾರ ಸಣ್ಣ ಅಂಗಡಿಗಳಲ್ಲಿ ಸಿಗರೇಟ್, ಬೀಡಿ ಮೊದಲಾಗಿ ತಂಬಾಕು ಪದಾರ್ಥಗಳನ್ನು ಚಿಲ್ಲರೆಯಾಗಿ ಮಾರಾಟ ಮಾಡದಂತೆ ತಡೆಯುವ ಕಾಯ್ದೆಯನ್ನು ಜಾರಿಗೆ ತರುತ್ತಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಒಂದು ವೇಳೆ ಇದು ಜಾರಿಯಾದದ್ದೇ ಆದರೆ ತಂಬಾಕು ಮಾರಾಟ ಮಾಡಿ ಬದುಕುತ್ತಿರುವ ನೂರಾರು ಬಡ ಕುಟುಂಬಗಳು ಬೀದಿ ಪಾಲಾಗುತ್ತವೆ ಎಂದರು.