ನಗರದ ಮಾರುಕಟ್ಟೆಯು ಒಂದು ವಾರದಿಂದ ಪೂಜಾ ಸಾಮಗ್ರಿಗಳ ಮಾರಾಟ ನಡೆದಿದ್ದು, ಜನದಟ್ಟಣೆ ಹೆಚ್ಚಿದೆ.ಬಾಳೆ, ಮಾವಿನ ಎಲೆ, ಹಣ್ಣುಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಬಂಗಿ ಕುಂಟಾ ಪ್ರದೇಶದಲ್ಲಿ, ಬಟ್ಟೆ ಬಜಾರ್ನಲ್ಲಿ ವ್ಯಾಪಾರವು ಚುರುಕಿನಿಂದ ನಡೆದಿದೆ. ದೀಪಾವಳಿಯಲ್ಲಿ ಮಳೆ ಬಿಡುವು ಕೊಟ್ಟಿದ್ದರಿಂದ ಸಂಭ್ರಮ ಆಚರಿಸುವಂತಾಗಿದೆ ಎಂದು ನಿಜಲಿಂಗಪ್ಪ ಕಾಲೊನಿ ನಿವಾಸಿ ವೆಂಕಟೇಶಾಚಾರ್ಯ ತಿಳಿಸಿದರು.