ಇದರಿಂದ ರೈತರು ಗುರುಗುಂಟಾದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹಟ್ಟಿ, ಕೋಠಾ ಸೇರಿದಂತೆ ಗೆಜ್ಜಲಗಟ್ಟಾ, ಆನ್ವರಿ, ಹಿರೇನಗನೂರು, ವೀರಾಪುರ, ನಿಲೋಗಲ್,ಚುಕನಟ್ಟಿ ಗ್ರಾಮದ ರೈತರು ಹೋಗಲು ಆಗುತ್ತಿಲ್ಲ. ಕೃಷಿ ಪರಿಕರಗಳು ತರಲು ಆಗುತ್ತಿಲ್ಲ. ಗುರುಗುಂಟಾ, ಪೈದೊಡ್ಡಿ, ರಾಯದುರ್ಗ, ಐದಬಾವಿ, ಗುಂತುಕೋಳ, ಟಣಮಕಲ್ ಗ್ರಾಮದಿಂದ ಹಟ್ಟಿ ಚಿನ್ನದ ಗಣಿ ಕಾರ್ಮಿಕರು ಸುತ್ತುಬಳಸಿ ಕೆಲಸಕ್ಕೆ ಬಂದು ಹೋಗಬೇಕಿದೆ.