ಬಂಗಾರಪೇಟೆ: ಪಟ್ಟಣದ 16 ನೇ ವಾರ್ಡಿನ ಅಬ್ದುಲ್ ಅಲಿ ಬಡಾವಣೆಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ನಿಂತು ಗಬ್ಬುನಾರುತ್ತಿದೆ. ಮಳೆ ನೀರು ಮನೆಗಳಿಗೆ ನುಗ್ಗಿರುವುದಲ್ಲದೆ ಖಾಲಿ ನಿವೇಶನಗಳಲ್ಲಿ ನಿಂತಿದೆ. ಸೊಳ್ಳೆ ಕಾಟ ಹೆಚ್ಚಿದ್ದು, ರೋಗ ಹರಡುವ ಭೀತಿ ಹಬ್ಬಿದೆ. ತಿಂಗಳಿಂದ ನೀರು ನಿಂತು ಪಾಚಿ ಕಟ್ಟಿದೆ. ದುರ್ವಾಸನೆ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ನಡೆಯುವ ಸ್ಥಿತಿ ಉಂಟಾಗಿದೆ.