ಕಡಿಯಾಳಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪಿ.ವಸಂತ್ ಭಟ್, ಉದ್ಯಮಿ ಪ್ರವೀಣ್ ಶೇಟ್ ರವರು ಪುಣ್ಯಕೋಟಿ ಗೋಸೇವಾ ಟ್ರಸ್ಟ್ ಗೆ ದೇಣಿಗೆಗಳನ್ನು ನೀಡಿದರು. ಉಡುಪಿ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ರಾಜೇಂದ್ರ ಪದುಬೆಟ್ಟು,ಅಂಬಲಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ದಯಶಿನಿ ಪಂದುಬೆಟ್ಟು, ಮಟ್ಟು ಲಕ್ಷ್ಮೀನಾರಾಯಣ, ಮಂಗಳೂರು ವಿಭಾಗದ ಕಾರ್ಯಕಾರಿಣಿ ಸದಸ್ಯ ಶಂಭು ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಮಹಿಳಾ ಮೋರ್ಚಾ ಅಧ್ಯಕ್ಷೆ ರಜನಿ ಹೆಬ್ಬಾರ್, ಹೆರ್ಗ ಶಕ್ತಿ ಕೇಂದ್ರ ಅಧ್ಯಕ್ಷ ಸುಬ್ರಮಣ್ಯ ಪೈ, ಉಪಸ್ಥಿತರಿದ್ದರು. ಅಮಿತಾ ಪ್ರಾರ್ಥಿಸಿದರು. ಕೊಡವೂರು ಮಂಜುನಾಥ್ ಭಟ್ ರವರು ವಂದಿಸಿದರು.