ಚೀನಾದ ಆಳ್ವಿಕೆಯ ವಿರುದ್ಧ ಬಂಡಾಯವೆದ್ದು, ವಿಫಲವಾಗಿ 1959ರಲ್ಲಿ ಭಾರತಕ್ಕೆ ಓಡಿ ಹೋಗಿರುವ ದೇಶಭ್ರಷ್ಟ ದಲೈಲಾಮಾರನ್ನು ಅಪಾಯಕಾರಿ ಪ್ರತ್ಯೇಕತಾವಾದಿ ಎಂದು ಚೀನಾ ಪರಿಗಣಿಸಿದೆ. ಆದರೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಧರ್ಮಗುರು ದಲೈಲಾಮಾ ತನ್ನ ‘ಮಾತೃಭೂಮಿ’ಗೆ ನಿಜವಾದ ಸ್ವಾಯತ್ತತೆಯನ್ನು ಬಯಸುವುದಾಗಿ ಹೇಳಿಕೊಂಡಿದ್ದಾರೆ.