<p>ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ!<br /> ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!!</p>.<p>ಸಾವಿರಾರು ವರುಷದಿಂದ<br /> ಜೀವಜಲವ ತುಂಬಿಕೊಂಡು<br /> ಜೀವಜಂತುಗಳಿಗೆ ನೆಲೆಯ ನೀಡುತಿರುವುವು;<br /> ಮುಗಿಲಮಾರಿ ಮುನಿಸಿನಿಂದ<br /> ಹಗಲು ಇರುಳು ಬಿರುಕುಗೊಂಡು<br /> ದುಗುಡದಿಂದ ಮಳೆಗೆ ಎದುರುನೋಡುತಿರುವುವು!</p>.<p>ನಾಡು ಕಟ್ಟಲೆಂದು ನಾವು<br /> ಕಾಡನೆಲ್ಲ ಬಿಡದೆ ಕಡಿದು<br /> ನೋಡುನೋಡುತಿರಲು ಮಳೆಯು ಇಲ್ಲವಾಯಿತು;<br /> ಮಳೆಯು ಇರದೆ ಕೆರೆಯು ಬರಿದು<br /> ಬೆಳೆಯು ಬರದೆ ಇಳೆಯು ಇರದು<br /> ಮಳೆಯು ಬೇಕು ಎಂಬ ಕೂಗು ನಿಲ್ಲದಾಯಿತು!</p>.<p>ಹೊಲದೊಳಿರುವ ಅನ್ನದಾತ<br /> ಛಲವ ಬಿಡದೆ ದುಡಿಯುವಾತ<br /> ಮಳೆಯು ಇಲ್ಲವಾಗುತಿರಲು ಮರುಗುತಿರುವನು ;<br /> ನೆಲದ ದಾಹ ತೀರದಿರಲು<br /> ಹೊಲದ ಮೋಹ ಸೆಳೆಯುತಿರಲು<br /> ನೆಲೆಯು ಕಾಣದಾಯಿತೆಂದು ಕೊರಗುತಿರುವನು!</p>.<p>ಜಲದೊಳಿರುವ ಜೀವಿಗಳಗೆ<br /> ನೆಲೆಯು ಇಲ್ಲದಾಗಿ ಕೊನೆಗೆ<br /> ನಲಿವು ಇರದೆ ನರಳಿ ನರಳಿ ಅಳಿದುಹೋದವು;<br /> ಇಳೆಗೆ ಮಳೆಯು ಇಳಿದು ಬರಲು<br /> ಹಳೆಯ ಸೊಬಗು ಮರಳಿ ಬಂದು<br /> ಜಲವು ತುಂಬಿ ಕೆರೆಗಳೆಲ್ಲ ಜೀವ ಪಡೆವುವು!</p>.<p>ಕನ್ನಡಾಂಬೆ ಮಡಿಲಿನಲ್ಲಿ<br /> ಚಿನ್ನ ಬೆಳೆವ ನಾಡಿನಲ್ಲಿ<br /> ಹೊನ್ನಗುಣದ ಕನ್ನಡಿಗರ ಕರೆಯ ಕೇಳಿರಿ-<br /> ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ<br /> ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p>ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ!<br /> ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!!</p>.<p>ಸಾವಿರಾರು ವರುಷದಿಂದ<br /> ಜೀವಜಲವ ತುಂಬಿಕೊಂಡು<br /> ಜೀವಜಂತುಗಳಿಗೆ ನೆಲೆಯ ನೀಡುತಿರುವುವು;<br /> ಮುಗಿಲಮಾರಿ ಮುನಿಸಿನಿಂದ<br /> ಹಗಲು ಇರುಳು ಬಿರುಕುಗೊಂಡು<br /> ದುಗುಡದಿಂದ ಮಳೆಗೆ ಎದುರುನೋಡುತಿರುವುವು!</p>.<p>ನಾಡು ಕಟ್ಟಲೆಂದು ನಾವು<br /> ಕಾಡನೆಲ್ಲ ಬಿಡದೆ ಕಡಿದು<br /> ನೋಡುನೋಡುತಿರಲು ಮಳೆಯು ಇಲ್ಲವಾಯಿತು;<br /> ಮಳೆಯು ಇರದೆ ಕೆರೆಯು ಬರಿದು<br /> ಬೆಳೆಯು ಬರದೆ ಇಳೆಯು ಇರದು<br /> ಮಳೆಯು ಬೇಕು ಎಂಬ ಕೂಗು ನಿಲ್ಲದಾಯಿತು!</p>.<p>ಹೊಲದೊಳಿರುವ ಅನ್ನದಾತ<br /> ಛಲವ ಬಿಡದೆ ದುಡಿಯುವಾತ<br /> ಮಳೆಯು ಇಲ್ಲವಾಗುತಿರಲು ಮರುಗುತಿರುವನು ;<br /> ನೆಲದ ದಾಹ ತೀರದಿರಲು<br /> ಹೊಲದ ಮೋಹ ಸೆಳೆಯುತಿರಲು<br /> ನೆಲೆಯು ಕಾಣದಾಯಿತೆಂದು ಕೊರಗುತಿರುವನು!</p>.<p>ಜಲದೊಳಿರುವ ಜೀವಿಗಳಗೆ<br /> ನೆಲೆಯು ಇಲ್ಲದಾಗಿ ಕೊನೆಗೆ<br /> ನಲಿವು ಇರದೆ ನರಳಿ ನರಳಿ ಅಳಿದುಹೋದವು;<br /> ಇಳೆಗೆ ಮಳೆಯು ಇಳಿದು ಬರಲು<br /> ಹಳೆಯ ಸೊಬಗು ಮರಳಿ ಬಂದು<br /> ಜಲವು ತುಂಬಿ ಕೆರೆಗಳೆಲ್ಲ ಜೀವ ಪಡೆವುವು!</p>.<p>ಕನ್ನಡಾಂಬೆ ಮಡಿಲಿನಲ್ಲಿ<br /> ಚಿನ್ನ ಬೆಳೆವ ನಾಡಿನಲ್ಲಿ<br /> ಹೊನ್ನಗುಣದ ಕನ್ನಡಿಗರ ಕರೆಯ ಕೇಳಿರಿ-<br /> ಕೊಲ್ಲಬೇಡಿ ಕೆರೆಗಳನ್ನ ಕೊಲ್ಲಬೇಡಿರಿ<br /> ಇಲ್ಲದಂತೆ ಮಾಡುವುದನು ಸುಳ್ಳು ಮಾಡಿರಿ!</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>