ವನ್ಯಜೀವಿಗಳ ಸಂರಕ್ಷಣೆಗೆ ಕಠಿಣ ಕಾಯ್ದೆ–ಕಾನೂನು ರೂಪಿಸಿದ್ದರೂ ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎನ್ನುವುದು ಶಾಸಕರ ಕಳವಳವಾಗಿತ್ತು. ವನ್ಯಜೀವಿಗಳಿಗೆ ಮತದಾನದ ಹಕ್ಕು ಕೊಟ್ಟಿದ್ದರೆ, ಮಾಂಸ, ಚರ್ಮ, ಉಗುರು, ಎಲುಬು, ಕಳ್ಳಸಾಗಣೆ....ಇತ್ಯಾದಿ ಉದ್ದೇಶಕ್ಕೆ ಶಿಕಾರಿಯಾಗುತ್ತಿರುವ ‘ಮತದಾರ ವನ್ಯಜೀವಿ ಬಂಧು’ಗಳ ಮೇಲೆ ರಾಜಕಾರಣಿಗಳಿಗೆ ಪ್ರೀತಿ ಉಕ್ಕುತ್ತಿತ್ತು. ಓಟಿನ ಆಸೆಗಾದರೂ ಅವುಗಳನ್ನು ಸಂರಕ್ಷಣೆಗೆ ಮುಂದಾಗುತ್ತಿದ್ದರೆನ್ನುವ ಆಶಯ ಅವರ ಮಾತಿನಲ್ಲಿತ್ತು!