ಬಳಿಕ, ಗ್ರಾಮದ ಕಟ್ಟೆಗೆ ಬಂದು ಕತ್ತೆಯನ್ನು ಬಳ್ಳಿಗಳಿಂದ ಅಲಂಕರಿಸಿದರು. ಪ್ರತಿ ಬಾರಿ ಹುಲ್ಲಿನ ಮೀಸೆ, ಗಡ್ಡ ಕಟ್ಟಿಕೊಂಡ ಕೊಂಡಿಗೆಕಾರನನ್ನು (ಚಾಡಿಕೋರ) ಕತ್ತೆಯ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡುವುದು ವಾಡಿಕೆ. ಆದರೆ, ಈ ಬಾರಿ ಕತ್ತೆ ಅಶಕ್ತವಾಗಿದ್ದರಿಂದ ಅದನ್ನೇ ಹೊತ್ತುಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ತೆರಳಿದರು.