‘ಪುರುಷೋತ್ತಮ್ ಎಂಬುವರಿಗೆ ಸೇರಿದ ಕಟ್ಟಡದ ಮೂರನೇ ಮಹಡಿಯಲ್ಲಿ ಮೋಲ್ಡಿಂಗ್ಗಾಗಿ ಕಂಬಿ ಕಟ್ಟುವ ಕೆಲಸದಲ್ಲಿ ನಾಗಭೂಷಣ್ ಹಾಗೂ ಗಜೇಂದ್ರ ನಿರತರಾಗಿದ್ದರು. ಮನೆ ಮೇಲೆ ಹಾದು ಹೋಗಿರುವ ಹೈಟೆನ್ಷನ್ ತಂತಿಗೆ ಕಂಬಿಯು ತಗುಲಿದೆ. ಇದರಿಂದ ವಿದ್ಯುತ್ ಪ್ರವಹಿಸಿದ್ದು, ನಾಗಭೂಷಣ್ ಸುಟ್ಟು ಕರಕಲಾಗಿದ್ದಾರೆ. ಗಜೇಂದ್ರ ಅವರಿಗೂ ಸುಟ್ಟ ಗಾಯಗಳಾಗಿವೆ. ಪುರುಷೋತ್ತಮ್ ಹಾಗೂ ಮೇಸ್ತ್ರಿ ರವಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಪೊಲೀಸರು ತಿಳಿಸಿದರು.