‘ಅನ್ಸಾರಿ ಪರ ನಿಂತ ಜೀನತ್ಗೆ ಜೀವ ಬೆದರಿಕೆ ಇತ್ತು. ಅವರ ಪರ ದನಿ ಎತ್ತದಂತೆ ಅಪರಿಚಿತ ವ್ಯಕ್ತಿಗಳು ಕರೆ ಮಾಡುತ್ತಿದ್ದರು. ನೆರವು ಮಾಡಲು ಹೋಗಿ ಜೀವಕ್ಕೆ ಅಪಾಯ ತಂದುಕೊಳ್ಳದಂತೆ ನಾವು ಅವಳಿಗೆ ಸಲಹೆ ನೀಡಿದ್ದೇವು. ಆದರೆ, ಅನ್ಸಾರಿ ಅವರ ತಾಯಿಯೊಂದಿಗೆ ಮಾತನಾಡಿದ ಬಳಿಕ ಪುತ್ರನ ಬಿಡುಗಡೆಗೆ ನೆರವು ನೀಡುವ ಭರವಸೆ ನೀಡಿದ್ದರು’ ಎಂದು ಜೀನತ್ ಸಹೋದರ ಸಲ್ಮಾನ್ ಲತಿಫ್ ಹೇಳಿದ್ದಾರೆ.