‘ಈ ಮೊದಲು ಸೇತುವೆಯ ಕೆಲ ಭಾಗ ಕೊಚ್ಚಿ ಹೋಗಿತ್ತು. ಆದರೆ ಈಗ ಮತ್ತಷ್ಟು ಭಾಗ ಕೊಚ್ಚಿ ಹೋಗಿದ್ದರಿಂದ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಮೋಳೆ ಗ್ರಾಮದ ಬಹುತೇಕ ರೈತರು ತೋಟದ ವಸತಿಗಳಲ್ಲಿಯೇ ವಾಸವಾಗಿದ್ದಾರೆ. ಜನರು, ವಿದ್ಯಾರ್ಥಿಗಳು, ವೃದ್ದರು ಈಗ ಈ ಮಾರ್ಗವಾಗಿ ತಂಗಡಿ, ಸಿನಾಳ ಗ್ರಾಮಗಳಿಗೆ ಹೋಗದಂತಾಗಿದೆ’ ಶೀಘ್ರವೇ ಸೇತುವೆ ದುರಸ್ಥಿಗೊಳಿಸಬೇಕು ಎಂದು ಗ್ರಾಮ ಪಂಚಾಯ್ತಿ ಸದಸ್ಯ ಲಕ್ಷ್ಮಣ ಹಳೇಮನಿ ದೂರಿದರು.