ಹಾವೇರಿ: ತಾಲ್ಲೂಕಿನ ದೇವಗಿರಿ ಗ್ರಾಮದ ತಿರಕಪ್ಪ ಬಡ್ಡಿ ಜಮೀನಿನಲ್ಲಿ ಕೃಷಿ ಇಲಾಖೆ ಈಚೆಗೆ ಕ್ಷೇತ್ರೋತ್ಸವ ಆಚರಿಸಿತು. ‘ಆರ್ಐಬಿ’ ಎಂಬ ಹೊಸ ಪದ್ಧತಿ ಅನುಸರಿಸಿ ಬೆಳೆಸಿದ ಹತ್ತಿಯ ಹೊಲವನ್ನು ಕೃಷಿ ಉಪ ನಿರ್ದೇಶಕ ಎಚ್. ಹುಲಿರಾಜ, ಸಹಾಯಕ ನಿರ್ದೇಶಕರಾದ ಡಿ. ಕೆ. ಕೊರಚರ, ಎನ್.ಎಫ್ ಕಟ್ಟೇಗೌಡ್ರ ಮತ್ತಿತರ ಅಧಿಕಾರಿಗಳ ಹಾಗೂ ರಸಗೊಬ್ಬರ ವಿತರಕರು ವೀಕ್ಷಣೆ ಮಾಡಿದರು.