ಪುತ್ತೂರು ತಾಲ್ಲೂಕಿನ ಸರ್ವೆ ಗ್ರಾಮದ ಬೈರಗುರಿ ನಿವಾಸಿ ವಿಜಯ್ ಅಪರಾಧಿ. ಈತ 2016ರ ಏಪ್ರಿಲ್ 11ರಂದು ಹಣ ನೀಡಿದ ಕಾರಣಕ್ಕಾಗಿ ತನ್ನ ಪತ್ನಿ ಭಾಗ್ಯ ಯಾನೆ ಭಾಗೀರಥಿ (31) ಜತೆ ಜಗಳವಾಡಿ, ಆಕೆಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಕೊಲೆ ಮಾಡಿರುವುದು ವಿಚಾರಣೆಯಿಂದ ಸಾಬೀತಾಗಿದ್ದು, ನ್ಯಾಯಾಧೀಶ ಎಂ.ರಾಮಚಂದ್ರ ಅವರು ಕಳೆದ ಸೋಮವಾರ ಆತನನ್ನು ತಪ್ಪಿತಸ್ಥ ಎಂದು ತೀರ್ಮಾನಿಸಿ ಆದೇಶ ನೀಡಿದ್ದರು. ಇದೀಗ ಅವರು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದಾರೆ.