ಜೇನು ಕೃಷಿ ಮಾಡುವ ಬಗ್ಗೆ ತೋಟಗಾರಿಕೆ ಇಲಾಖೆಯವರ ಜತೆ ರೈತ ಕಾಂತರಾಜು ಸಹ ವಾರಕ್ಕೊಮ್ಮೆ ಮನೆಯಲ್ಲಿ ತರಬೇತಿ ನೀಡುತ್ತಾರೆ. ‘ಜೇನುಹುಳುಗಳು ಸಪೋಟಾ, ತೆಂಗು, ಮಾವು, ಅಡಿಕೆ ಮತ್ತು ತರಕಾರಿ ಸೇರಿದಂತೆ ಅನೇಕ ಬೆಳೆಗಳಿಗೆ ಬಾಧೆ ನೀಡುವ ಹುಳುಗಳನ್ನು ನಾಶಪಡಿಸಿ ಇಳುವರಿ ಹೆಚ್ಚಿಸುತ್ತವೆ’ ಎಂದು ಅವರು ವಿವರಿಸುತ್ತಾರೆ.
ಜೇನಿಗೆ ಮಾರುಕಟ್ಟೆಯಲ್ಲಿ ₹ 700 ಬೆಲೆ ಇದೆ. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರ್ಗ್ಯಾನಿಕ್ ಸಂಸ್ಥೆಗಳೂ ಕೊಳ್ಳುತ್ತವೆ ಎನ್ನುತ್ತಾರೆ ಅವರು.