ನರಕಚತುರ್ದಶಿ ದಿನ ಸಹ ಬೆಳಗಿನ 4ಕ್ಕೆ ಸ್ವಾಮಿಗೆ ಅಭಿಷೇಕ ನೆರವೇರಿತು. ರಾತ್ರಿ ದೀಪಾವಳಿ ಮಂಟಪಕ್ಕೆ ಉತ್ಸವ ನೆರವೇರಿತು. ಅಲ್ಲಿ 2ನೇ ಸ್ಥಾನೀಕರ ಪೂಜೆಗಳು ನೆರವೇರಿದ ನಂತರ ದೇವಾಲಯದ ನಾಲ್ಕೂ ಮಂದಿ ಸ್ಥಾನೀಕರಿಗೆ ಮಾಲೆ ಮರ್ಯಾದೆ ನಡೆದವು. ವಿಶೇಷ ನಾದಸ್ವರ ವಾದನ ಸೇವೆ ಮತ್ತು ನಾಡಪಟಾಕಿಗಳ ವೈವಿಧ್ಯಮಯ ಚಿತ್ತಾರದೊಂದಿಗೆ ಉತ್ಸವ ನೆರವೇರಿತು.