ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಗೆ ಒಳಪಡುವ ಆಗುಂಬೆ ಹೋಬಳಿಯ ಅಗಸರಕೋಣೆ, ಹೊಸಗದ್ದೆ, ಗಾರ್ಡರಗದ್ದೆ, ಪಡುವಳ್ಳಿ, ಶೀರೂರು, ಮುಳುವಾಡಿ, ಬಾಳೇಹಳ್ಳಿ, ಹನಸ, ಅಚ್ಚೂರು, ಮುಂಡುವಳ್ಳಿ, ಅಣ್ಣುವಳ್ಳಿ, ವಡೇಗದ್ದೆ, ಕುಂದ, ಚಂಗಾರು ಸೇರಿದಂತೆ ಹೋಬಳಿ ವ್ಯಾಪ್ತಿಯ ಬಹುತೇಕ ಪ್ರದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡುಪ್ರಾಣಿಗಳ ಸಂಖ್ಯೆ ಹೆಚ್ಚಿದ್ದು, ಕಡವೆ, ಜಿಂಕೆ, ಕಾಡು ಹಂದಿ, ಕಾಡು ಕೋಣ, ಆನೆಗಳು ಕಾಡಿನ ಸೆರಗಿನಂಚಿನಲ್ಲಿರುವ ಜಮೀನಿನ ಮೇಲೆ ಪದೇ ಪದೇ ದಾಳಿ ಮಾಡಿ ಬೆಳೆಯನ್ನು ಧ್ವಂಸ ಮಾಡುತ್ತಿವೆ.