ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಪುಣ್ಯಸ್ಥಳಗಳಲ್ಲಿ ಒಂದಾದ ಅಕ್ನಾರಹಳ್ಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಸ್ಥಳಕ್ಕೆ ಬಂದು ಗಂಗಮ್ಮನ ಪೂಜೆ ನೆರವೇರಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ನಂಬಿಕೆ ಭಕ್ತ ಸಮೂಹದಲ್ಲಿ ಇದೆ.
ಈಚೆಗೆ ಸುರಿದ ಮಳೆಯಿಂದ ಹಳ್ಳದಲ್ಲಿ ನೀರು ಬಂದಿದ್ದು, ಪೂಜೆ ಸಲ್ಲಿಸಲು ನವ ವಿವಾಹಿತರು, ಸಂತಾನಫಲಕ್ಕಾಗಿ ಹರಕೆ ಹೊತ್ತವರು, ಒಕ್ಕಲ ಮಕ್ಕಳು ಪೂಜೆ ಸಲ್ಲಿಸಲು ಬರುತ್ತಿದ್ದಾರೆ