ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಎರಡು ಅದ್ಭುತ ಶಕ್ತಿ ಶೀಘ್ರದಲ್ಲೆ ನಾಶ; ವಿಷಗಾಳಿ ಸೇವಿಸಿ ಸಹಸ್ರಾರು ಜನರ ಸಾವಾಗಲಿದೆ: ಕೋಡಿಶ್ರೀ ಭವಿಷ್ಯ

Last Updated 22 ಅಕ್ಟೋಬರ್ 2017, 9:34 IST
ಅಕ್ಷರ ಗಾತ್ರ

ಹಾಸನ: ‘ಜಗತ್ತಿನ ಎರಡು ಅದ್ಭುತ ಶಕ್ತಿಗಳು ಶೀಘ್ರದಲ್ಲೆ ನಾಶ ಆಗ್ತವೆ. ದೇಶದ ಗಡಿಯಲ್ಲಿ ಮದ್ದು–ಗುಂಡುಗಳು ಮೊಳಗುತ್ತವೆ. ಭೀಕರ ಅನಾಹುತ ಸಂಭವಿಸಲಿದ್ದು, ಸಹಸ್ರಾರು ಜನರು ವಿಷಗಾಳಿ ಸೇವಿಸಿ ಸಾಯುತ್ತಾರೆ’ ಎಂದು ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

‘ಗಡಿಯಲ್ಲಿ– ಮದ್ದು ಗುಂಡುಗಳು ಅಬ್ಬರಿಸುತ್ತವೆ. ಇನ್ನು ಮುಂದೆಯೂ ರಾಜ್ಯದಾದ್ಯಾಂತ ಮಳೆಯಾಗಲಿದೆ’ ಎಂದರು.

‘ಬಿತ್ತಿದಾ ಬೆಳೆಯಾ ಪರರು ಕೊಯ್ದಾರು, ಬಿತ್ತುದಾ ಬೀಜವೊಂದು ಫಸಲು ಇನ್ನೊಂದು ಇದೇ ಆಗೋದು’ ಎಂದು ನುಡಿದರು.

‘ಮುಂದಿನ ಸರ್ಕಾರ ಯಾವುದು ಎಂಬ ಕುರಿತು ಎರಡು ತಿಂಗಳಲ್ಲಿ ಹೇಳುತ್ತೇನೆ. ಈಗ ಸ್ಪಷ್ಟಪಡಿಸಿದರೆ ಒಬ್ಬರಿಗೆ ನೊವು ಮತ್ತೊಬ್ಬರಿಗೆ ನಲಿವು. ಆದ್ದರಿಂದ ನಾನು ಹೇಳುವುದಿಲ್ಲ ಎಂದು ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಹೇಳಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT