ದಾಳಿಯಿಂದ ಕೈ ಮಾಂಸಖಂಡ ಕಿತ್ತು ಬಂದಿದೆ. ರೈತನ ಕಿರುಚಾಟ ಕೇಳಿ ಆತನ ಮಗ ಹಾಗೂ ಇತರ ರೈತರು ನೆರವಿಗೆ ಧಾವಿಸಿದಾಗ ಕರಡಿ ಓಡಿಹೋಗಿದೆ. ದಾಗಿನಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ರೈತ ಸಂಘದ ಕಾರ್ಯದರ್ಶಿ ಎಸ್.ಆರ್.ರವಿಕುಮಾರ್ ತಿಳಿಸಿದರು.