ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ ದಾಳಿ: ತೀವ್ರವಾಗಿ ಗಾಯಗೊಂಡ ರೈತ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಬಸವಾಪಟ್ಟಣ (ದಾವಣಗೆರೆ ಜಿಲ್ಲೆ): ಸಮೀಪದ ಯಲೋದಹಳ್ಳಿಯಲ್ಲಿ ಭಾನುವಾರ ಮುಂಜಾನೆ ಜೋಳದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತ ಪರಸಪ್ಪ (50) ಎಂಬುವವರ ಮೇಲೆ ಕರಡಿಯೊಂದು ಹಠಾತ್‌ ದಾಳಿ ನಡೆಸಿ, ಆತನ ಬಲಗೈಯನ್ನು ಕಚ್ಚಿ ಗಾಯಗೊಳಿಸಿದೆ.

ದಾಳಿಯಿಂದ ಕೈ ಮಾಂಸಖಂಡ ಕಿತ್ತು ಬಂದಿದೆ. ರೈತನ ಕಿರುಚಾಟ ಕೇಳಿ ಆತನ ಮಗ ಹಾಗೂ ಇತರ ರೈತರು ನೆರವಿಗೆ ಧಾವಿಸಿದಾಗ ಕರಡಿ ಓಡಿಹೋಗಿದೆ. ದಾಗಿನಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ರೈತ ಸಂಘದ ಕಾರ್ಯದರ್ಶಿ ಎಸ್‌.ಆರ್‌.ರವಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT