ವಿಜಯಪುರ: ಟಿಪ್ಪು ಜಯಂತಿಗೆ ತಮ್ಮನ್ನು ಆಹ್ವಾನಿಸುವುದು ಬೇಡ ಎಂದ ಯತ್ನಾಳ, ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಜಯಂತಿ ಆಚರಿಸಿ ಆಹ್ವಾನಿಸಿದರೆ ಸಂತೋಷದಿಂದ ಬರುವುದಾಗಿ ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ಈ ಬಗ್ಗೆ ಜಿಲ್ಲಾಡಳಿತಕ್ಕೆ ಪತ್ರ ಬರೆಯುವುದಾಗಿಯೂ ಅವರು ತಿಳಿಸಿದರು.
‘ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ಆಚರಣೆ. ಹಿಂದೂಗಳ ಭಾವನೆಗೆ ಧಕ್ಕೆ ತರುತ್ತದೆ’ ಎಂದರು.