ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಟ್ರಸ್ಟ್ ಅಧ್ಯಕ್ಷ ನವೀನ್, ‘ಇದು ಎಸ್.ಜಾನಕಿ ಅವರು ನೀಡುತ್ತಿರುವ ಕೊನೆಯ ಕಾರ್ಯಕ್ರಮ. ಆರು ತಿಂಗಳ ಹಿಂದೆಯೇ ಅವರು ಸಾರ್ವಜನಿಕ ಕಾರ್ಯಕ್ರಮ ನೀಡುವುದಿಲ್ಲ ಎಂದು ಹೇಳಿದ್ದರು. ಸತತವಾಗಿ ಅವರಲ್ಲಿ ಮನವಿ ಮಾಡಿದ ಫಲವಾಗಿ ಕಾರ್ಯಕ್ರಮ ನೀಡಲು ಒಪ್ಪಿದ್ದು, ಇನ್ನು ಮುಂದೆ ಕಾರ್ಯಕ್ರಮ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಚಲನಚಿತ್ರರಂಗದ ಗಣ್ಯರಾದ ಶಿವರಾಜ್ಕುಮಾರ್, ಬಿ.ಸರೋಜಾದೇವಿ, ಶೈಲಶ್ರೀ, ಸಾಹುಕಾರ್ ಜಾನಕಿ, ಭಾರತಿ ವಿಷ್ಣುವರ್ಧನ್, ಹಂಸಲೇಖ, ಶ್ರೀನಾಥ್, ರಾಜೇಶ್, ಜಯಂತಿ ಭಾಗಿಯಾಗಲಿದ್ದಾರೆ’ ಎಂದು ತಿಳಿಸಿದರು.