ಪಕ್ಷದ ಉದ್ಘಾಟನೆ ಕುರಿತು ಕೂಡ್ಲಿಗಿ ತಹಶೀಲ್ದಾರರಿಗೆ ಮತ್ತು ಡಿವೈಎಸ್ಪಿಗೆ ಸಂಜೆ ಮಾಹಿತಿ ಪತ್ರ ಸಲ್ಲಿಸಿದ ಬಳಿಕ ಅವರು ಉಜ್ಜಯಿನಿಯ ಸದ್ಧರ್ಮ ಪೀಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿದ್ದರು. ‘ಪಕ್ಷದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಹ್ವಾನಿಸಿದಾಗ ಸ್ವಾಮೀಜಿ ಬರಲು ನಿರಾಕರಿಸಿದರು. ಧರ್ಮ ಮತ್ತು ರಾಜಕೀಯವನ್ನು ಬೆರೆಸುವುದು ಬೇಡ ಎಂದರು’ ಎಂದು ಅನುಪಮಾ ತಿಳಿಸಿದರು.