ಸ್ತಬ್ಧ ಚಿತ್ರಗಳ ಮೂಲಕ ಮರುಸೃಷ್ಟಿಸಿದ ಕಿತ್ತೂರ ಸಂಸ್ಥಾನ, ಚನ್ನಮ್ಮ ಅವರ ಹೋರಾಟದ ದೃಶ್ಯಾವಳಿಗಳು ಇತಿಹಾಸವು ಕಣ್ಣೆದೆರೇ ಅವತರಿಸಿದಂತಹ ಅನುಭವ ನೀಡಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಬೆಳಿಗ್ಗೆ ಆರಂಭಗೊಂಡ ಮೆರವಣಿಗೆಯಲ್ಲಿನ ಕಿತ್ತೂರ ಚನ್ನಮ್ಮನ ಕೋಟೆಯ ಸ್ತಬ್ಧ ಚಿತ್ರ, ಕಿತ್ತೂರ ಚನ್ನಮ್ಮನ ವೇಷಧಾರಿ, ಸೈನ್ಯಾಧಿಪತಿಗಳು, ಕಾಲ್ದಳದ ಸೈನಿಕರು, ಅಶ್ವದಳ, ಆನೆ, ಒಂಟೆ, ಕುದುರೆ, ಛತ್ರಿ, ಚಾಮರಗಳು ರಾಜ ವೈಭವವನ್ನು ಕಣ್ಣೆದುರು ಸೃಷ್ಟಿಸಿತು.