ಈ ಕುರಿತು ತಹಶೀಲ್ದಾರ್ ಯಲ್ಲಪ್ಪ ಸುಬೇದಾರ್ಗೆ ಪ್ರಮುಖ 10 ಬೇಡಿಕೆಗಳ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸಲಾಯಿತು. ಸಿಪಿಐ (ಎಂ) ಹಿರಿಯ ಮುಖಂಡ ವೆಂಕೋಬರಾವ್ ವಾಗಣಗೇರಿ, ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ಅಧ್ಯಕ್ಷ ಸುಭಾಷ ಹೊಸಮನಿ, ಕಾರ್ಯದರ್ಶಿ ಪರಶುರಾಮ ಬಡಿಗೇರ್, ಖಜಾಂಚಿ ಸಿದ್ಧರಾಮ ಹರವಾಳ, ಮಹಾದೇವ್ ಮಾರಡಗಿ, ಸಿದ್ದಣ್ಣ ನೀರಲಕೋಡ್, ಧೂಳಪ್ಪ ಹರವಾಳ, ಆನಂದಪ್ಪ ಚಿಂಚೋಳಿ ಸೇರಿದಂತೆ ಪ್ರಾಂತ ರೈತ ಸಂಘ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.