ಚಿಂಚೋಳಿ: ಹೂವು, ಹಣ್ಣು, ತರಕಾರಿ ಹಾಗೂ ವಿವಿಧ ಬೆಳೆಗಳ ಬೇಸಾಯದಲ್ಲಿ ಕೀಟಗಳ ನಿರ್ವಹಣೆಗೆ ಅಂಟುಬಲೆ ಪರಿಣಾಮಕಾರಿಯಾಗಿದೆ. ‘ಅತ್ಯಂತ ಕಡಿಮೆ ಬೆಲೆಯಲ್ಲಿ ಲಭಿಸುವ ಇವುಗಳನ್ನು ಬಳಸಿ ರೈತರು ಕೀಟಗಳನ್ನು ಹತೋಟಿಗೆ ತರಬಹುದಾಗಿದ್ದು, ಇದರಿಂದ ಕೀಟನಾಶಕ ಸಿಂಪರಣೆಗೆ ಬಳಸುವ ಖರ್ಚಿನ ಅಪವ್ಯಯ ಮತ್ತು ಬೆಳೆಗಳ ಮೇಲೆ ಪರೋಕ್ಷವಾಗಿ ನಡೆಯುವ ಅಡ್ಡಪರಿಣಾಮ ನೈಸರ್ಗಿಕವಾಗಿ ತಡೆಯಲು ಅಂಟುಬಲೆ ಉಪಯುಕ್ತ’ ಎಂದು ಕಲಬುರ್ಗಿಯ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥರಾದ ಡಾ.ರಾಜು ತೆಗ್ಗಳ್ಳಿ ತಿಳಿಸಿದ್ದಾರೆ.