'ಅಂತರಾಳ' ಸಂಸ್ಥೆಯು ರವೀಂದ್ರ ಕಲಾಕ್ಷೇತ್ರದಲ್ಲಿ ಈಚೆಗೆ ಆಯೋಜಿಸಿದ್ದ ಡಾ.ದೊಡ್ಡರಂಗೇಗೌಡರ ಜನಪ್ರಿಯ ಗೀತೆಗಳ ಕಾರ್ಯಕ್ರಮ 'ನಿನ್ನ ರೂಪು ಎದೆಯ ಕಲಕಿ' ಪ್ರೇಕ್ಷಕರ ಮನಗೆಲ್ಲುವಲ್ಲಿ ಸಫಲವಾಯಿತು.
ಗೌಡರನ್ನು ಹೂಮಳೆಯೊಂದಿಗೆ ವೇದಿಕೆಗೆ ಬರಮಾಡಿಕೊಳ್ಳಲಾಯಿತು. ತುಂಬಿದ ಸಭೆಯ ಅಭಿಮಾನದ ಗೌರವಕ್ಕೆ, ಸ್ವಾಗತಕ್ಕೆ ದೊಡ್ಡರಂಗೇಗೌಡರು ಭಾವುಕರಾದರು. ತಮ್ಮ ಚಿತ್ರ ಸಾಹಿತ್ಯ ಪಯಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಸಿನಿಕ್ಷೇತ್ರದ ದಿಗ್ಗಜರಾದ ಚಿನ್ನೇಗೌಡರು, ಸಂಗೀತ ನಿರ್ದೇಶಕ ರಾಜನ್, ನಟ ಸಂಚಾರಿ ವಿಜಯ್ ದೀಪ ಬೆಳಗುವ ಮೂಲಕ ಹಾಗೂ ಶಶಿಧರ್ ಕೋಟೆ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಿದರು.
ರಾಮಚಂದ್ರ ಹಡಪದ್ ಮತ್ತು ಶ್ವೇತಾ ಪ್ರಭು ಅವರ ಭಾವಪೂರ್ಣ ಗಾಯನ ಪ್ರೇಕ್ಷಕರ ಮನಸೂರೆಗೊಂಡವು.
ಸಿ.ಅಶ್ವಥ್ ಅವರ ಜೊತೆ ನಿಕಟ ಸಂಪರ್ಕವಿದ್ದ ದೊಡ್ಡರಂಗೇಗೌಡರು, ಹಡಪದ್ ಅವರ ಸಂಗೀತಕ್ಕೆ ಮನಸೋತು 'ಅಭಿನವ ಅಶ್ವಥ್' ಎಂದು ಶ್ಲಾಘಿಸಿದರು.
ಸಿನಿಕ್ಷೇತ್ರದ ದಿಗ್ಗಜರಾದ ಚಿನ್ನೇಗೌಡರು, ಸಂಗೀತ ನಿರ್ದೇಶಕ ರಾಜನ್, ನಟ ಸಂಚಾರಿ ವಿಜಯ್ ದೀಪ ಬೆಳಗುವ ಮೂಲಕ ಹಾಗೂ ಶಶಿಧರ್ ಕೋಟೆ ಗಾಯನದ ಮೂಲಕ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.