ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಮಧ್ಯಾಹ್ನ 3.30ರ ಸುಮಾರಿಗೆ ಶ್ವೇತಾ ಮೊದಲು ಹಳಿ ಮೇಲೆ ಹೋಗಿದ್ದರು. ರೈಲು ವೇಗವಾಗಿ ಬರುತ್ತಿರುವುದನ್ನು ಕಂಡ ಮಂಜುನಾಥ್, ಪತ್ನಿಯನ್ನು ರಕ್ಷಿಸಲು ಮುಂದಾದರು. ಆದರೆ, ಪ್ರಾಣ ಉಳಿಸಿಕೊಳ್ಳುವ ಯತ್ನದಲ್ಲಿ ಇಬ್ಬರೂ ಕೆಳಗೆ ಬಿದ್ದರು. ರೈಲು ಹರಿದು ಹೋಗಿದ್ದರಿಂದ ಶ್ವೇತಾ ಅವರ ಎರಡೂ ಕಾಲುಗಳು ಹಾಗೂ ಮಂಜುನಾಥ್ ಅವರ ಎಡಗೈ ತುಂಡಾಯಿತು.