‘ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. 80 ವರ್ಷ ದಾಟಿದ ಈ ವಯೋವೃದ್ಧರು ಇನ್ನೂ ಅಧಿಕಾರದ ಆಸೆ ಬಿಟ್ಟಿಲ್ಲ. ಇವರೇ ಕೆಲ ಸ್ವಾಮೀಜಿಗಳನ್ನು ತಿಂಗಳ ಬಾಡಿಗೆಗೆ ಇಟ್ಟುಕೊಂಡಿದ್ದಾರೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭೆಯ ರಾಜ್ಯ ಯುವ ಉಪಾಧ್ಯಕ್ಷ ಸಂಗಮೇಶ ಬಬಲೇಶ್ವರ, ಬೆಳಗಾವಿಯ ಶಂಕರ ಗುಡಸ, ಸಿಂದಗಿಯ ವಿಠ್ಠಲ ಕೋಳೂರು, ಕಲಬುರ್ಗಿಯ ಭೀಮನಗೌಡ ಪರಗೊಂಡ, ಧಾರವಾಡದ ರಾಜಣ್ಣ ಮರಳಪ್ಪನವರ, ಬೀಳಗಿಯ ಮಲ್ಲಿಕಾರ್ಜುನ ಕೊಟಗಿ ತಿಳಿಸಿದ್ದಾರೆ.